ಕಾಸರಗೋಡಿನ ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ನೀರ್ಚಾಲು ಗ್ರಾಮದ ಒಂದನೇ ವಾರ್ಡಿನ ಕಿಳಿಂಗಾರು ಬಾಲಗಿರಿಯಲ್ಲಿ ನಮ್ಮೀ ಶಾಲೆಯು ಕಾರ್ಯಾಚರಿಸುತ್ತಿದೆ. 1938 ರಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಈ ಪ್ರದೇಶದ ಬಡ ದಲಿತರ ಅಭಿವೃಧಿಗಾಗಿ ಶಾಲೆಯು ಸ್ಥಾಪಿತವಾಯಿತು. ತೀರಾ ಹಿಂದುಳಿದ ಪ್ರದೇಶವಾಗಿದ್ದ ಕಿಳಿಂಗಾರು ಪರಿಸರದ ಜನರಿಗೆ ಶಾಲಾ ವ್ಯವಸ್ಥೆ ಲಭಿಸದೆ ಇದ್ದಾಗ ಇಲ್ಲಿಯ ಗಣ್ಯ ವ್ಯಕ್ತಿಗಳಾದ ದಿ| ಬ್ರಹ್ಮ ಶ್ರೀ ವೇದ ಮೂರ್ತಿ ನಡುಮನೆ ಸುಬ್ರಾಯ ಭಟ್ , ಯನ್. ಗೋಪಾಲಕೃಷ್ಣ ಭಟ್ , ಕಡೆಗಂಜಿ ವಿಷ್ಣು ಭಟ್ ಮೊದಲಾದವರು ಸೇರಿ ಒಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸುವುದಾಗಿ ನಿರ್ಧರಿಸಿದರು.
1-4 ನೇ ತರಗತಿ ಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ . ಪ್ರಸ್ತುತ ಶ್ರೀ ಕೆ.ಯನ್ ಕೃಷ್ಣ ಭಟ್ ನಮ್ಮೀ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾಗಿದ್ದಾರೆ. ಪ್ರತೀ ವರ್ಷವೂ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು, ಸಮವಸ್ತ್ರಗಳನ್ನು,ಹಲವಾರು ಬಹುಮಾನಗಳನ್ನು ಪ್ರಾಯೋಜಿಸುತ್ತಾ ಸಹಕಾರಗಳನ್ನು ನೀಡುತ್ತಿರುವರು. ಶಾಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖರಾಗಿದ್ದಾರೆ. ಕೊಡುಗೈದಾನಿ ಎಂದೇ ಪ್ರಸಿದ್ದರಾದ ಶ್ರೀ ಸಾಯಿರಾಂ ಗೋಪಾಲಕೃಷ್ಣ ಭಟ್ ರವರು ನಮ್ಮೀ ಶಾಲೆಯ ಬೆನ್ನೆಲುಬಾಗಿದ್ದಾರೆ. ಮುಖ್ಯೋಪಾದ್ಯಾಯರಾದ ಕೆ.ರಾಮಕೃಷ್ಣ ಭಟ್ , ಮಧುಮತಿ . ಎ , ಶ್ರೀವಿದ್ಯಾ . ಎ , ಪ್ರದೀಪ ಕುಮಾರ್ ಶೆಟ್ಟಿ . ಡಿ. ಬಿ ಮೊದಲಾದ ನುರಿತ ಅಧ್ಯಾಪಕರಿದ್ದಾರೆ. ಅಡುಗೆ ಸಹಾಯಕಿಯಾಗಿ ಕಮಲ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ , ಮೈಕ್ ಸೆಟ್ , ಒಂದನೇ ತರಗತಿಯಿಂದಲೇ ಕನ್ನಡ ಮಾಧ್ಯಮದಲ್ಲಿ ಕಂಪ್ಯೂಟರ್ ಮತ್ತು ಇಂಗ್ಲೀಷ್ ಬೋಧನೆ , ಕಲೆ , ವೃತ್ತಿ ಪರಿಚಯ , ಸಂಗೀತ ಕಲಿಕೆ , ಯೋಗ ಶಿಕ್ಷಣ ,ಶುಚಿ ರುಚಿಯಾದ ಬಿಸಿಯೂಟ ಪದ್ಧತಿ , ವಾರದಲ್ಲಿ ಎರಡು ಸಲ ಹಾಲು ವಿತರಣೆ , ವಾರಕ್ಕೊಮ್ಮೆ ಮೊಟ್ಟೆ ವಿತರಣೆ, ಉಚಿತ ಸಮವಸ್ತ್ರ ವಿತರಣೆ , ಉಚಿತ ಪಾಠ ಪುಸ್ತಕ ವಿತರಣೆ ,. ಸರಕಾರದ ವಿವಿಧ ಅನುದಾನಗಳನ್ನು ಕ್ಲಪ್ತ ಸಮಯದಲ್ಲಿ ಅರ್ಹರಿಗೆ ನೀಡುವುದು , ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ , ವಿಶಾಲವಾದ ಕ್ರೀಡಾಂಗಣ , ಜಾರು ಬಂಡಿ ............... ಇವು ನಮ್ಮ ಶಾಲೆಯ ಪ್ರತ್ಯೇಕತೆಗಳಲ್ಲಿ ಕೆಲವು ಮಾತ್ರ .
ನಮ್ಮೀ ಶಾಲೆಯ ಪುಟಾಣಿ ಮಕ್ಕಳು ವಿವಿಧ ಮಟ್ಟದ ಸ್ಪರ್ಧೆಗಳಲ್ಲಿ ಮತ್ತು ಮೇಳಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿಯನ್ನು ತರುತ್ತಿದ್ದಾರೆ . ಈ ಶಾಲೆಯ ಹಳೆಯ ವಿಧ್ಯಾರ್ಥಿಗಳು ಇಂದು ದೇಶ ವಿದೇಶದ ನಾನಾ ಕಡೆಗಳಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಹೆಮ್ಮೆಯ ವಿಷಯವೇ ಸರಿ .
No comments:
Post a Comment