ಸತತ ಎರಡನೇ ಬಾರಿ - ಗಾಂಧಿ ಕ್ವಿಝ್ ವಿಜಯಿ ಜಿ.ಎಸ್.ಟಿಯು ಕುಂಬಳೆ ಉಪಜಿಲ್ಲಾ ವತಿಯಿಂದ ನಡೆದ "ಗಾಂಧಿ ಕ್ವಿಝ್" ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸತತ ಎರಡನೇ ಬಾರಿ ಪಡೆದ ಕಿಳಿಂಗಾರು
ಎ.ಎಲ್.ಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಕಾರ್ತಿಕ್ .
ಶಾಲಾ ಪಿ.ಟಿ.ಎ ಅಧ್ಯಕ್ಷ ಕೆ . ಪ್ರಕಾಶ್ ಭಟ್ , ಬಿ ಆರ್ ಸಿ ತರಬೇತುದಾರರಾದ ಅಂಬಿಕ ಟೀಚರ್ ಮತ್ತು ಸಜಿತ, ಶಿಕ್ಷಕಿ ಮಧುಮತಿ, ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ನಾಲ್ಕನೇ ತರಗತಿ ವಿದ್ಯಾರ್ಥಿ ಸುಮಿತ್ ನ ಮನೆಗೆ ಭೇಟಿಯಿತ್ತರು.
ಬದಿಯಡ್ಕ ಗ್ರಾಮ ಪಂಚಾಯತಿನ ವತಿಯಿಂದ ನೀಡಲ್ಪಟ್ಟ ಮಕ್ಕಳ ' ಶಾಲಾ ಡೈರಿ 'ಯನ್ನು 2 ನೇ ವಾರ್ಡ್ ಸದಸ್ಯೆ ಶ್ರೀಮತಿ ಸೌಮ್ಯಾ ಮಹೇಶ್ ವಿತರಿಸಿದರು.ಪಂಚಾಯತಿನ ಎಲ್ಲಾ ಶಾಲಾ ಮಕ್ಕಳ ಕೃತಿ 'ಬೇಸಗೆ ಮಳೆಯ ಮಧುರ ನಿನಾದ ' ವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು.