ರಕ್ಷಕರ ಜಾಗೃತಿ ಕಾರ್ಯಕ್ರಮ
ನಮ್ಮ ಶಾಲೆಯಲ್ಲಿ ರಕ್ಷಕರ ಜಾಗೃತಿ ಕಾರ್ಯಕ್ರಮ ಶುಕ್ರವಾರ ಅಪರಾಹ್ನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಕೆ . ಪ್ರಕಾಶ್ ಭಟ್ ವಹಿಸಿದ್ದರು , ಯಂ .ಪಿ.ಟಿ.ಎ ಅಧ್ಯಕ್ಷೆ ಆಶಾ ನಿಡುಗಳ ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ನೇತೃತ್ವ ವಹಿಸಿದ್ದರು. ಸೌಹಾರ್ದಯುತ ಮನೆಯ ವಾತಾವರಣ,ಕಲಿಕಾ ಬೆಂಬಲ, ಭಾವನಾತ್ಮಕ ಬೆಂಬಲ ಮುಂತಾದವುಗಳ ಕುರಿತು ಮನವರಿಕೆ ಮಾಡಲಾಯಿತು.ಶಾಲಾ ಶಿಕ್ಷಕಿ ಮಧುಮತಿ ಸ್ವಾಗತಿಸಿ, ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.ಶಿಕ್ಷಕಿ ಶ್ರೀವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment