ಪಿ . ಎನ್ . ಪಣಿಕ್ಕರ್ ರವರ ಸ್ಮರಣೆಯೊಂದಿಗೆ ," ಓದಿರಿ ಪುಸ್ತಕ ಬೆಳೆಯುವುದು ಮಸ್ತಕ" ಎಂಬ ಧ್ಯೇಯದೊಂದಿಗೆ ವಾಚನಾ ವಾರವನ್ನು ಆಚರಿಸಲಾಯಿತು. ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಲು ಹಲವು ಚಟುವಟಿಕೆಗಳನ್ನು ನಡೆಸಲಾಯಿತು. ಪುಸ್ತಕ ಓದಿ ಆಸ್ವಾದನಾ ಟಿಪ್ಪಣಿ ಬರೆಯುವ ಸ್ಪರ್ಧೆಯನ್ನು ಮತ್ತು ಪದ್ಯ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಬಹುಮಾನಗಳನ್ನು ಪಿ.ಟಿ.ಎ ಅಧ್ಯಕ್ಷ ಕೆ . ಪ್ರಕಾಶ್ ಭಟ್ ವಿತರಿಸಿದರು. ಮುಖ್ಯೋಪಾಧ್ಯಾಯರಾದ ಕೆ. ರಾಮಕೃಷ್ಣ ಭಟ್ ಶುಭಾಶಂಸನೆಗೈದರು. ಅಧ್ಯಾಪಿಕೆ ಮಧುಮತಿ ಸ್ವಾಗತಿಸಿ, ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.
No comments:
Post a Comment